Saturday 27 June 2015

ನಮಸ್ಕಾರ ,

ನಾನು ಕೃಷ್ಣಮೂರ್ತಿ ಪುರಾಣಿಕ ,

ನಾನೇನು ವಿಧ್ಯಾವಂತನಲ್ಲ , ಬುದ್ದಿವಂತಿಕೆಯನ್ನು ಆರ್ಥಿಕಕ್ಕಾಗಿ ಬಳಸುವ ಸ್ವಭಾವವಿಲ್ಲ. ನನ್ನದು ಎನ್ನುವ ಉದ್ಯೋಗವಂತೂ ಇಲ್ಲವೇ ಇಲ್ಲ. ಹಾಗಾಗಿ ನನಗೆ ಏನು ಬಂದರೂ, ಅದು ದೈವದತ್ತವಾಗಿ ಬಂದದ್ದು . ಅದರ ಹೊರತು ನನ್ನದೆನ್ನುವದಕ್ಕೆ ನನಗೆ ಯಾವ ಹಕ್ಕೂ ಇಲ್ಲ .

              ನಾನು ನಿಶ್ಚಯ ಮಾಡಿದ್ದೆ, ತಾನಾಗಿ ಬರುವುದು ಮಾತ್ರ ನನ್ನದು . ಅದನ್ನು ಮಾತ್ರ ಸ್ವೀಕರಿಸುತ್ತೇನೆ . ಆದುದರಿಂದ ನನ್ನದೆಲ್ಲದರ ಒಡತಿ "ತಾಯಿ (ದೇವಿ ). ಅವಳು ತೋರಿದ ಕೆಲಸ ಮಾಡುವುದು ನನ್ನ ಕರ್ತವ್ಯ . ಒಮ್ಮೊಮ್ಮೆ ಸಾಮಾಜಿಕ ಭಾವ , ಹೃದ್ಗತ ಭಾವ . ದ್ವಂದ್ವವಾದಾಗ ನಾನು ನಿರ್ಣಯ ಕೇಳುವುದು ಅವಳನ್ನೇ . ಆಗ ಸಿಕ್ಕಿದ ಉತ್ತರ ತಾಯಿ ಹೇಳಿದ್ದು . ಅದು ಕೆಲವೊಮ್ಮೆ ಚೆನ್ನಾಗಿರುತ್ತದೆ. "ಹೌದು , ಚೆನ್ನಾಗಿದೆ ಅಂದರೆ ಏನು ? ಅದೂ ಅವರವರ ಭಾವ. ನನಗೆ ಚೆನ್ನಾಗಿದ್ದುದು ನಿಮಗೆ ಚೆನ್ನಾಗಿರಬೇಕೆಂದೆನು ಇಲ್ಲವಲ್ಲ ?". ಅದಕ್ಕಾಗಿ ಬರೆಯುವುದು , ಹೇಳುವುದು ,ಈ ಚರ್ಚೆ ;

ನನ್ನ ಅನಿಸಿಕೆಗಳಿಗೆ ನಿಮ್ಮ ಅಭಿಪ್ರಾಯಗಳನ್ನು ನಾನು ಸ್ವಾಗತಿಸುತ್ತೇನೆ .